ಕೇಳಲೆಷ್ಟು ಭಯಂಕರವೋ ಅಷ್ಟೇ ಸತ್ಯವೂ ಕೂಡಾ.
ಆಶ್ಚರ್ಯವಾಗುತ್ತಿದೆಯಾದರೂ ಇದು ಸತ್ಯ! ಇಂಥಹಾ ಅವಘಡಗಳು ಇಲ್ಲಿ ಪ್ರತಿ ೧೫ ದಿನಗಳಿಗೊಮ್ಮೆ, ತಿಂಗಳಿಗೊಮ್ಮೆ ನಡೆಯುವುದು ಬಹುತೇಕ ನಿಶ್ಚಿತವಾಗಿದೆ ಎಂದರೆ ತಪ್ಪಾಗಲಾರದು.
ಬೆಂಗಳೂರು-ಮ್ವಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ ಸುಮಾರು ೬೫ ಕಿ.ಮೀ. ದೂರದಲ್ಲಿ ಒಂದು ಊರು ಇದೆ ಕಣ್ರೀ. ಈ ಗ್ರಾಮದ ವ್ಯಾಪ್ತಿಯಲ್ಲಿ ತಿಂಗಳಿಗೆ ಇಲ್ಲವೆಂದರೂ ನಾಲ್ಕಾರು ಅಪಘಾತಗಳು ಸಂಭವಿಸುವುದು, ಕನಿಷ್ಟ ಒಬ್ಬರಾದರೂ ಬಲಿಯಾಗುವುದು ಗ್ಯಾರಂಟಿ!
ಗ್ರಾಮದ ವಿಶಿಷ್ಟತೆಗಳು: ಇದೊಂದು ಪುರಾತನ, ಹೊಳೆಯ ಅಂಚಿನಲ್ಲಿರುವ ಗ್ರಾಮ. ಈ ಗ್ರಾಮಕ್ಕೆ ಶತಮಾನಗಳಷ್ಟು ವರ್ಷಗಳ ಇತಿಹಾಸವಿದೆ. ಕಣ್ವ ಮಹರ್ಷಿಗಳು ಇಲ್ಲಿ ಸಂಚರಿಸುತ್ತಾ, ದಿನನಿತ್ಯಾ ಹೊಳೆಯಲ್ಲಿ ಸ್ನಾನ ಮಾಡಿ ತಪಸ್ಸು ಮಾಡುತ್ತಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳೂ ಸಹ ಇವೆ.
ಈ ಗ್ರಾಮದಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಿರುವ ದೇವಾಲಯಗಳು ಎನ್ನಲಾದ ಸುಮಾರು ೧೦ಕ್ಕೂ ಹೆಚ್ಚು ದೇವಾಲಯಗಳು ಇವೆ. ಇವುಗಳಲ್ಲಿ ಶ್ರೀ ಅಪ್ರಮೇಯ ದೇವಸ್ಥಾನವೂ ಒಂದು. ಇದು ತಮಗೆ ತಿಳಿದಿರಲೂಬಹುದು. ಈ ದೇವಸ್ಥಾನ ಪುರಾತನ ಕಾಲದಿಂದಲೂ ಭಕ್ತರ ಎಲ್ಲಾ ಅಭೀಷ್ಟೆಗಳನ್ನು ಈಡೇರಿಸುತ್ತಿದೆ ಎಂದು ಸುತ್ತಮುತ್ತಲ ಜನರ ಅನಿಸಿಕೆಯಾಗಿದೆ.
ಇಲ್ಲಿನ ದೇವಾಲಯಗಳಲ್ಲಿ ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ನಿಧಿ ಅಡಗಿಸಿಟ್ಟಿದ್ದಾರೆ ಎನ್ನುವ ನಂಬಿಕೆ ಇಲ್ಲಿನ ಗ್ರಾಮದವರಲ್ಲಿದ್ದು, ಇದೇ ಈ ಎಲ್ಲಾ ಅಪಘಾತಗಳು, ಅವಘಢಗಳಿಗೆ ಕಾರಣವಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನು ನಂಬಲು ಸಾಕಷ್ಟು ಅನುಭವಗಳೂ ಸಹ ಇಲ್ಲಿನ ಜನರಿಗೆ ಆಗಿವೆ.
ಈ ದೇವಾಲಯಗಳಲ್ಲಿನ ನಿಧಿಯನ್ನು ರಾಹು ಕಾಯುತ್ತಿದೆ ಎನ್ನಲಾಗಿದ್ದು, ಪ್ರತೀ ಅಮಾವಾಸ್ಯೆ, ಹುಣ್ಣಿಮೆಗಳಂದು ಈ ಭಾಗದಲ್ಲಿ ರಾಹು ನರಬಲಿ, ರಕ್ತ ಕೇಳುತ್ತಿದೆ ಎಂದೇ ಬಣ್ಣಿಸಲಾಗುತ್ತಿದೆ.
ಇದಕ್ಕೆ ಇಂಬು ನೀಡುವಂತೆ ಈ ಗ್ರಾಮದ ಆರಂಭದಿಂದ ಕೊನೆಯವರೆಗೂ ಈ ದಿನಗಳಲ್ಲಿ ಒಂದಾದರೊಂದು ಅಪಘಾತಗಳು ನಡೆಯುತ್ತಲೇ ಇವೆ. ತಿಂಗಳಿಗೆ ಇಲ್ಲವೆಂದರೂ ಒಬ್ಬರಾದರೂ ಸಾಯುತ್ತಿದ್ದಾರೆ.
ನಂಬಬಹುದೇ: ಮಾನವ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಸಾಧನೆ ಮೆರೆಯುತ್ತಿದ್ದರೂ, ಪ್ರಕೃತಿ ನಿಯಮಗಳಿಗೆ ವಿರುದ್ದವಾಗಿ ಏನೂ ಸಾಧಿಸಲು ಸಾದ್ಯವಾಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಈ ‘ಬಲಿ ಪುರಾಣ’!
ಜಗತ್ತು ಎಷ್ಟೇ ಮುಂಚೂಣಿಯಲ್ಲಿದ್ದರೂ ಪ್ರಕೃತಿಯನ್ನು ಮೀರಿಸಲು ಸಾದ್ಯವಾಗುವುದಿಲ್ಲ. ನಾವು ದೇವರಿದ್ದಾನೆ ಎಂಬುದನ್ನು ನಂಬುವುದಾದರೆ ಇದನ್ನೂ ನಂಬಲೇ ಬೇಕಲ್ಲವೇ?
ಆಶ್ಚರ್ಯವಾಗುತ್ತಿದೆಯಾದರೂ ಇದು ಸತ್ಯ! ಇಂಥಹಾ ಅವಘಡಗಳು ಇಲ್ಲಿ ಪ್ರತಿ ೧೫ ದಿನಗಳಿಗೊಮ್ಮೆ, ತಿಂಗಳಿಗೊಮ್ಮೆ ನಡೆಯುವುದು ಬಹುತೇಕ ನಿಶ್ಚಿತವಾಗಿದೆ ಎಂದರೆ ತಪ್ಪಾಗಲಾರದು.
ಬೆಂಗಳೂರು-ಮ್ವಸೂರು ಹೆದ್ದಾರಿಯಲ್ಲಿ ಬೆಂಗಳೂರಿನಿಂದ ಸುಮಾರು ೬೫ ಕಿ.ಮೀ. ದೂರದಲ್ಲಿ ಒಂದು ಊರು ಇದೆ ಕಣ್ರೀ. ಈ ಗ್ರಾಮದ ವ್ಯಾಪ್ತಿಯಲ್ಲಿ ತಿಂಗಳಿಗೆ ಇಲ್ಲವೆಂದರೂ ನಾಲ್ಕಾರು ಅಪಘಾತಗಳು ಸಂಭವಿಸುವುದು, ಕನಿಷ್ಟ ಒಬ್ಬರಾದರೂ ಬಲಿಯಾಗುವುದು ಗ್ಯಾರಂಟಿ!
ಗ್ರಾಮದ ವಿಶಿಷ್ಟತೆಗಳು: ಇದೊಂದು ಪುರಾತನ, ಹೊಳೆಯ ಅಂಚಿನಲ್ಲಿರುವ ಗ್ರಾಮ. ಈ ಗ್ರಾಮಕ್ಕೆ ಶತಮಾನಗಳಷ್ಟು ವರ್ಷಗಳ ಇತಿಹಾಸವಿದೆ. ಕಣ್ವ ಮಹರ್ಷಿಗಳು ಇಲ್ಲಿ ಸಂಚರಿಸುತ್ತಾ, ದಿನನಿತ್ಯಾ ಹೊಳೆಯಲ್ಲಿ ಸ್ನಾನ ಮಾಡಿ ತಪಸ್ಸು ಮಾಡುತ್ತಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳೂ ಸಹ ಇವೆ.
ಈ ಗ್ರಾಮದಲ್ಲಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಿರುವ ದೇವಾಲಯಗಳು ಎನ್ನಲಾದ ಸುಮಾರು ೧೦ಕ್ಕೂ ಹೆಚ್ಚು ದೇವಾಲಯಗಳು ಇವೆ. ಇವುಗಳಲ್ಲಿ ಶ್ರೀ ಅಪ್ರಮೇಯ ದೇವಸ್ಥಾನವೂ ಒಂದು. ಇದು ತಮಗೆ ತಿಳಿದಿರಲೂಬಹುದು. ಈ ದೇವಸ್ಥಾನ ಪುರಾತನ ಕಾಲದಿಂದಲೂ ಭಕ್ತರ ಎಲ್ಲಾ ಅಭೀಷ್ಟೆಗಳನ್ನು ಈಡೇರಿಸುತ್ತಿದೆ ಎಂದು ಸುತ್ತಮುತ್ತಲ ಜನರ ಅನಿಸಿಕೆಯಾಗಿದೆ.
ಇಲ್ಲಿನ ದೇವಾಲಯಗಳಲ್ಲಿ ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ನಿಧಿ ಅಡಗಿಸಿಟ್ಟಿದ್ದಾರೆ ಎನ್ನುವ ನಂಬಿಕೆ ಇಲ್ಲಿನ ಗ್ರಾಮದವರಲ್ಲಿದ್ದು, ಇದೇ ಈ ಎಲ್ಲಾ ಅಪಘಾತಗಳು, ಅವಘಢಗಳಿಗೆ ಕಾರಣವಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನು ನಂಬಲು ಸಾಕಷ್ಟು ಅನುಭವಗಳೂ ಸಹ ಇಲ್ಲಿನ ಜನರಿಗೆ ಆಗಿವೆ.
ಈ ದೇವಾಲಯಗಳಲ್ಲಿನ ನಿಧಿಯನ್ನು ರಾಹು ಕಾಯುತ್ತಿದೆ ಎನ್ನಲಾಗಿದ್ದು, ಪ್ರತೀ ಅಮಾವಾಸ್ಯೆ, ಹುಣ್ಣಿಮೆಗಳಂದು ಈ ಭಾಗದಲ್ಲಿ ರಾಹು ನರಬಲಿ, ರಕ್ತ ಕೇಳುತ್ತಿದೆ ಎಂದೇ ಬಣ್ಣಿಸಲಾಗುತ್ತಿದೆ.
ಇದಕ್ಕೆ ಇಂಬು ನೀಡುವಂತೆ ಈ ಗ್ರಾಮದ ಆರಂಭದಿಂದ ಕೊನೆಯವರೆಗೂ ಈ ದಿನಗಳಲ್ಲಿ ಒಂದಾದರೊಂದು ಅಪಘಾತಗಳು ನಡೆಯುತ್ತಲೇ ಇವೆ. ತಿಂಗಳಿಗೆ ಇಲ್ಲವೆಂದರೂ ಒಬ್ಬರಾದರೂ ಸಾಯುತ್ತಿದ್ದಾರೆ.
ನಂಬಬಹುದೇ: ಮಾನವ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಸಾಧನೆ ಮೆರೆಯುತ್ತಿದ್ದರೂ, ಪ್ರಕೃತಿ ನಿಯಮಗಳಿಗೆ ವಿರುದ್ದವಾಗಿ ಏನೂ ಸಾಧಿಸಲು ಸಾದ್ಯವಾಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಈ ‘ಬಲಿ ಪುರಾಣ’!
ಜಗತ್ತು ಎಷ್ಟೇ ಮುಂಚೂಣಿಯಲ್ಲಿದ್ದರೂ ಪ್ರಕೃತಿಯನ್ನು ಮೀರಿಸಲು ಸಾದ್ಯವಾಗುವುದಿಲ್ಲ. ನಾವು ದೇವರಿದ್ದಾನೆ ಎಂಬುದನ್ನು ನಂಬುವುದಾದರೆ ಇದನ್ನೂ ನಂಬಲೇ ಬೇಕಲ್ಲವೇ?